ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ವಿರೇಂದರ್ ಭಟ್ ತೀರ್ಪು ನೀಡುವ ಮುನ್ನ ಹೇಳಿಕೆ ನೀಡಿ, ದೆಹಲಿ ನಿವಾಸಿಯಾದ ಆರೋಪಿ ಸಂಜೀವ್ ಕುಮಾರ್ ಮನೆಗೆ ಆಹ್ವಾನಿಸಿದ್ದ ಮಹಿಳಾ ಅತಿಥಿಯೊಬ್ಬಳು ಕುಡಿದು ಮತ್ತೇರಿ ಮಲಗಿದ್ದಾಗ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ಹೇಯ ಕೃತ್ಯ. ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.