ಶಾರದಾ ಎಂಬ ಹೆಸರಿನ ಅಜ್ಜಿ ತನ್ನ ಮಂಚವನ್ನು ಮನೆಯಿಂದ ಹೊರಗೆಳೆದು ತಣ್ಣನೆಯ ಗಾಳಿಯ ಸುಖ ಅನುಭವಿಸಲು ಹೊರಗೆ ಮಲಗಿದ ಕೂಡಲೇ ನಿದ್ರಾದೇವಿಗೆ ಶರಣಾಗಿದ್ದರು. ಸೆಲ್ವಮುರುಗನ್ ಎಂಬ ಆಟೋ ಚಾಲಕನ ಮೇಲಿನಿಂದ ಜಿಗಿದಾಗ ಕೆಳಗೆ ಮಹಿಳೆ ಮಲಗಿದ್ದನ್ನು ಗಮನಿಸಿರಲಿಲ್ಲ. ಅಜ್ಜಿಯ ಮೈಮೇಲೆ ಬಿದ್ದಿದ್ದರಿಂದ ಅಜ್ಜಿ ಚಿರನಿದ್ರೆ ಅಪ್ಪಿದರು. ತಲೆಗೆ ಗಾಯಗಳಾದ ಚಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಸೆಲ್ವಮುರುಗನ್ ಪಾನಮತ್ತನಾಗಿ ಪತ್ನಿ ಧನಲಕ್ಷ್ಮಿ ಮತ್ತು ಸೋದರನ ಜತೆ ಜಗಳವಾಡಿಕೊಂಡು ಕಟ್ಟಡದ ಟೆರೇಸ್ ಮೇಲೆ ಹೋಗಿ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ. ಪದೇ ಪದೇ ಅದೇ ರೀತಿ ಮಾಡಿದ್ದರಿಂದ ಪತ್ನಿ ಸಹ ಅವನ ಬೆದರಿಕೆಗೆ ನಿರ್ಲಕ್ಷ್ಯ ವಹಿಸಿದ್ದಳು. ಸೆಲ್ವಮುರುಗನ್ ಅಜ್ಜಿಯ ಮೇಲೆ ಬಿದ್ದ ಕೂಡಲೇ ಅವಳ ಕೂಗಿಗೆ ಜನರಿಗೆ ಎಚ್ಚರವಾಯಿತು. ಸೆಲ್ವಮುರುಗನ್ ಮತ್ತು ಶಾರದಾ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಸೆಲ್ವಂ ತಲೆಬುರುಡೆಗೆ ಮತ್ತು ಕಾಲಿಗೆ ಗಾಯಗಳಾಗಿದ್ದು, ಅಜ್ಜಿ ಪರಲೋಕ ವಾಸಿಯಾದರು.