ಗೋಖ್ಲಪುರ್ ಗ್ರಾಮದ ನಿವಾಸಿಯಾದ 50 ವರ್ಷ ವಯಸ್ಸಿನ ಮೊಹಮ್ಮದ್ ಸಗೀರ್, ಶಾಲಾ ವಿದ್ಯಾರ್ಥಿನಿಯಾದ ಪುತ್ರಿಗೆ ಯಾಕೆ ಮಧ್ಯಾಹ್ನದೂಟ ನೀಡಲು ನಿರಾಕರಿಸಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಪಡೆಯಲು ಶಿಕ್ಷಕರ ಭೇಟಿಗಾಗಿ ಶಾಲೆಗೆ ಬಂದಿದ್ದರು ಎನ್ನಲಾಗಿದೆ.
ಶಾಲಾ ಶಿಕ್ಷಕರ ವರ್ತನೆ ಬಗ್ಗೆ ಹೆಡ್ಮಾಸ್ಟರ್ ಬಳಿ ದೂರುತ್ತಿದ್ದಂತೆ ಆಕ್ರೋಶಗೊಂಡ ಶಿಕ್ಷಕರು, ಸಗೀರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಸಗೀರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದರೂ ಗುರುವಾರದಂದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಆರಾರಿಯಾ ಜಿಲ್ಲೆಯಲ್ಲಿ 1918 ಶಾಲೆಗಳಲ್ಲಿ ಮಧ್ಯಾಹ್ನದೂಟ ನೀಡಲಾಗುತ್ತಿದ್ದು, ಸುಮಾರು 1 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.