ಯುವತಿಯ ಮೇಲೆ ರೇಪ್ ಎಸಗಿದ ಕಟೀಲು ದುರ್ಗಾಪರಮೇಶ್ವರಿ ಮಂದಿರದ ಅರ್ಚಕ ಅಪ್ಪು ಭಟ್ ಬಂಧನ

ಸೋಮವಾರ, 8 ಫೆಬ್ರವರಿ 2016 (14:38 IST)
19 ವರ್ಷ ವಯಸ್ಸಿನ ಯುವತಿಯ ಮೇಲೆ ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಸಹಾಯಕ ಅರ್ಚಕನೊಬ್ಬನನ್ನು ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
 
ಕಳೆದ ವರ್ಷ ಅತ್ಯಾಚಾರದ ಘಟನೆ ನಡೆದಿದ್ದರೂ ಬಹಿರಂಗವಾಗಿರಲಿಲ್ಲ. ಆದರೆ, ಯುವತಿ ಗರ್ಭಪಾತಕ್ಕಾಗಿ ಆಸ್ಪತ್ರೆಗೆ ದಾಖಲಾದ ನಂತರ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.  
 
ಪೊಲೀಸ್ ಮೂಲಗಳ ಪ್ರಕಾರ, 56 ವರ್ಷ ವಯಸ್ಸಿನ ಹರಿಶ್ಚಂದ್ರರಾವ್ ಅಲಿಯಾಸ್ ಅಪ್ಪು ಭಟ್ಟಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯಾಗಿದ್ದಾನೆ. ಯುವತಿ ಗರ್ಭವತಿಯಾದಾಗ ಸ್ಥಳೀಯ ನಾಯಕರುಗಳೊಂದಿಗೆ ಸೇರಿ ಹಣದ ಆಮಿಷವೊಡ್ಡಿದ್ದನು ಎನ್ನಲಾಗಿದೆ.
 
ಯುವತಿ ಗರ್ಭಪಾತಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆದರೆ, ಗರ್ಭಪಾತದ ಅವಧಿ ಮೀರಿದ್ದರಿಂದ ಗರ್ಭಪಾತ ಮಾಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಅಡಳಿತ ಮಂಡಳಿಯ ಮೇಲೆ ಅರ್ಚಕ ಅಪ್ಪು ಭಟ್ ಒತ್ತಾಯ ಹೇರಿದಾಗ ಆಸ್ಪತ್ರೆ ಸಿಬ್ಬಂದಿಗೆ ಸಂಶಯ ಬಂದಿದೆ.
 
ನಂತರ, ಸತ್ಯ ಮಾಹಿತಿ ಗೊತ್ತಾಗಿ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಜ್ಪೆ ಪೊಲೀಸರು ಯುವತಿಯಿಂದ ದೂರು ಪಡೆದು ಅರ್ಚಕ ಅಪ್ಪು ಭಟ್‌ನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿ ಭಟ್‌ಗೆ ನ್ಯಾಯಾಂಗದ ವಶಕ್ಕೆ ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ