ಮೊನ್ನೆ ತಾನೇ ಮಹಾರಾಷ್ಟ್ರದ ಜೋಡಿಯೊಂದು ಮ್ಯಾರಥಾನ್ ಓಡಿ ಮದುವೆಯಾದ ಕಥೆ ಓದಿದ್ದೀರಿ. ಮತ್ತೀಗ ಬೆಂಗಳೂರಿನ ಜೋಡಿಯೊಂದು ಇದೇ ರೀತಿಯಲ್ಲಿ ವಿವಾಹ ಬಂಧನಕ್ಕೊಳಗಾಗಿದೆ.
ಬೆಂಗಳೂರು ಮೂಲದ ಅನಂತ ತ್ರಿವೇದಿ (31) ಮತ್ತು ಕವಿತಾ ಬಾತ್ರಾ (28) ಇಂದು ಮುಂಜಾನೆ ರಾಜಸ್ಥಾನದ ಜೈಪುರದಲ್ಲಿ 25ಕೀಲೋಮೀಟರ್ ಓಡಿ ಫಿನಿಶಿಂಗ್ ಲೈನ್ನಲ್ಲಿ ಹಾರ ಬದಲಾಯಿಸಿಕೊಂಡು ಸತಿಪತಿಗಳಾದರು.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಮತ್ತು ಕೋರಮಂಗಲದಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಅನಿಲ್ ಮ್ಯಾರಥಾನ್ ಓಡಿದ ಬಳಿಕ ಮದುವೆಯನ್ನು ಮಾಡಿಕೊಳ್ಳಬೇಕೆಂಬ ತಮ್ಮ ಇಚ್ಛೆಯನ್ನು ಎಂಜಿನಿಯರ್ ಆಗಿರುವ ತಮ್ಮ ಭಾವಿ ಪತ್ನಿ ಕವಿತಾ ಬಳಿ ಹೇಳಿಕೊಂಡಿದ್ದರು.
ಪತಿಯ ಬಯಕೆಗೆ ಕವಿತಾ ಕೂಡ ಸಮ್ಮತಿ ಸೂಚಿಸಿದ್ದು, ಅದರಂತೆ ಇಂದು ಅವರಿಬ್ಬರು ಮ್ಯಾರಥಾನ್ ಓಡಿ ಮದುವೆಯಾಗಿದ್ದಾರೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಜಾವಿಲ್ ತೆಹ್ಸಿಲ್ ನಿವಾಸಿಗಳಾದ ನವನಾಥ್ ಹಾಗೂ ಪೂನಂ ಎಂಬುವವರು ಕೂಡ ಶುಕ್ರವಾರ ಹೀಗಾಗಿ 25 ಕೀಲೋಮೀಟರ್ ಓಡಿಕೊಂಡು ವಿವಾಹ ನೋಂದಣಿ ಕಚೇರಿಗೆ ಹೋಗಿ ವಿವಾಹವಾಗಿದ್ದಾರೆ.
ತವರಿಗೆ ಹಿಂತಿರುಗಿದ ಬಳಿಕ ಸಾಂಪ್ರದಾಯಿಕ ಮದುವೆ ಮಾಡಿಸಲು ಅನಂತ್- ಕವಿತಾ ಪೋಷಕರು ನಿರ್ಧರಿಸಿದ್ದಾರೆ.