ದುಷ್ಕರ್ಮಿಗಳು ಕರ್ನಾಟಕ ಮೂಲದವರು ಎನ್ನಲಾಗುತ್ತಿದ್ದು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಸುಫಾರಿ ನೀಡಿ ಈ ಕೃತ್ಯ ನಡೆಸಿರಬಹುದೆಂದು ಹೇಳಲಾಗುತ್ತಿದೆ. ಈ ಹಿಂದೆಯೂ ಮೋಹನ್ ಅವರ ಮೇಲೆ ಹಲ್ಲೆ ಯತ್ನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಅವರು ಭದ್ರತಾ ಪಡೆಗಳನ್ನು ನೇಮಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ ಹಠಾತ್ ದಾಳಿ ನಡೆದಾಗ ಗಾಯಗೊಂಡ ದಂಪತಿಗಳ ರಕ್ಷಣೆಗೆ ನಿಂತ ಭದ್ರತಾ ಸಿಬ್ಬಂದಿ ಆರೋಪಿಗಳನ್ನು ಸೆರೆ ಹಿಡಿಯಲು ವಿಫಲರಾಗಿದ್ದಾರೆ.