ಸೇನಾಪಡೆಗಳ ಯೋಧರಿಗಾಗಿ ಸೈನಿಕ ಕಾಲೋನಿ ಸ್ಥಾಪಿಸುವ ಕುರಿತಂತೆ ಧ್ವನಿ ಎತ್ತಿದ ಶಾಸಕ ಶೇಖ್ ಅಬ್ದುಲ್ ರಶೀದ್, ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ತೋರಿಸಿದಾಗ ಸದನದಲ್ಲಿ ಕೋಲಾಹಲ ಸೃಷ್ಠಿಯಾಯಿತು. ಸರಕಾರ ಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿದವು.
ರಾಜ್ಯದಲ್ಲಿ ಸೈನಿಕ ಕಾಲೋನಿ ಸ್ಥಾಪಿಸಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಮುಫ್ತಿ ಭರವಸೆ ನೀಡಿದ್ದರು.ಆದರೆ, ಇಂದಿನ ದಿನಪತ್ರಿಕೆಯಲ್ಲಿ ಬಂದ ಸುದ್ದಿ ಬೇರೆಯದಾಗಿದೆ. ಇದರಲ್ಲಿ ಯಾವುದೇ ಸತ್ಯ? ಕೂಡಲೇ ಬಹಿರಂಗಪಡಿಸಿ ಎಂದು ವಿಪಕ್ಷಗಳ ಸದಸ್ಯರು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಒತ್ತಾಯಿಸಿದರು.