1965 ಇಂಡೋ ಪಾಕ್ ಯುದ್ಧದ ಮೇಲೆ ಮಂಗಳವಾರ ಟ್ರೈ ಸರ್ವಿಸ್ ವಿಚಾರಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಮತ್ತು ಅತಿಕ್ರಮಣಕ್ಕೆ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಯುದ್ಧಗಳಿಗೆ ನಾವು ಸಿದ್ಧರಾಗಿರಬೇಕಾದ ಅಗತ್ಯವಿದೆ ಎಂದು ಹೇಳಿದರು.
'ನಮಗೆದುರಾಗುತ್ತಿರುವ ಬೆದರಿಕೆಗಳು ಮತ್ತು ಸವಾಲುಗಳು ಸಂಕೀರ್ಣವಾಗಿ ಮಾರ್ಪಟ್ಟಿವೆ. ಪಾಕ್ ಗಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ನಮ್ಮ ಸೈನಿಕರನ್ನು ಮೊದಲಿಗಿಂತ ಹೆಚ್ಚು ಹೆಚ್ಚು ಜಾಕರೂಕತೆಯನ್ನು ಹೊಂದುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಹೊಸ ಹೊಸ ವಿಧಾನಗಳನ್ನು ಪಾಕ್ ಅನುಸರಿಸುತ್ತಿದೆ', ಎಂದು ದಲ್ಬೀರ್ ಸಿಂಗ್ ಆತಂಕ ವ್ಯಕ್ತ ಪಡಿಸಿದ್ದಾರೆ.