ಶಿಖರ್ ದೀಪ್ ಅವರನ್ನು ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆಬಂದಿದ್ದ ಅವರ ಸಂಬಂಧಿಗೆ ಶಿಖರ್ ಅವರ ಲಗೇಜ್, ಫೋನ್, ವ್ಯಾಲೆಟ್ ಮಾತ್ರ ಪತ್ತೆಯಾಗಿತ್ತು. ಶಿಖರ್ ಭಾವ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ತಮ್ಮ ಮಗನ ನಾಪತ್ತೆ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದೆಂದು ಶಿಖರ್ ತಂದೆ ಕರ್ನಲ್ ಅನಂತ್ ಕುಮಾರ್ ಶಂಕೆ ವ್ಯಕ್ತ ಪಡಿಸಿದ್ದರು.
ಕಟಿಹಾರ್ನಲ್ಲಿ ತಮ್ಮನ್ನು ಅಪಹರಿಸಿ ಪಾಟ್ನಾಗೆ ಕೊಂಡೊಯ್ದು ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ಪ್ರಜ್ಞೆ ಮರಳಿದಾಗ ನಾನೊಂದು ಕತ್ತಲ ಕೋಣೆಯಲ್ಲಿದ್ದೆ. ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಶಿಖರ್ ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಶಿಖರ್ದೀಪ್ ಅವರ ಮೈ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದಿರುವುದು ಪೊಲೀಸರಲ್ಲಿ ಶಂಕೆಯನ್ನು ಹುಟ್ಟಿಸಿದೆ.