ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ರಾಜುಲಾಲ್ ಗುರ್ಜಾರ್, ಎಂಬಾತ ಶುಕ್ರವಾರ ತನ್ನ ಮೊಬೈಲ್ ಫೋನ್ನ್ನು ಚಾರ್ಜಿಗಿಟ್ಟುಕೊಂಡು ಬಳಸುತ್ತಿದ್ದ . ಇದ್ದಕ್ಕಿದ್ದಂತೆ, ದೊಡ್ಡ ಶಬ್ಧದೊಂದಿಗೆ ಮೊಬೈಲ್ ಬ್ಯಾಟರಿ ಸ್ಪೋಟಗೊಂಡಿತು. ಗುರ್ಜಾರ್ ಎದೆ ಮತ್ತು ಕೈಗೆ ತೀವ್ರ ಸುಟ್ಟ ಗಾಯಗಳಾದವು.
ಶವದ ಮರಣೋತ್ತರ ಪರೀಕ್ಷೆ ನಡೆಸಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ ಸಮಂದರ್ ಲಾಲ್ ಮೀನಾ, ವಿದ್ಯುತ್ ಶಾಕ್ ಮತ್ತು ಸುಟ್ಟ ಗಾಯಗಳಿಂದ ಆತ ಸಾವನಪ್ಪಿದ್ದಾನೆ ಎಂದು ವರದಿ ನುಡಿದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಯುತ್ತಿದೆ.