ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಕೃತಿಗಳ ಸುವರ್ಣ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದ ಪ್ರಧಾನಿ, "ರಾಜ್ಯದ ಪ್ರಗತಿ ಮತ್ತು ಸಮೃದ್ಧಿಯ ವಿಷಯದಲ್ಲಿ ತಾವು ಬದ್ಧರಾಗಿದ್ದೇವೆ", ಎಂದಿದ್ದಾರೆ.
ಕವಿ ದಿನಕರ್ 1961 ರಲ್ಲಿ ಬರೆಯ ಒಂದು ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ಅವರು, "ಬಿಹಾರ ಜನತೆ ಜಾತಿ ಪದ್ಧತಿಯನ್ನು ಮೀರಿ ನಡೆಯಬೇಕು ಮತ್ತು ಪ್ರಾಮಾಣಿಕರಿಗೆ ಬೆಂಬಲ ನೀಡಬೇಕು. ನೀವು ಒಂದು ಅಥವಾ ಎರಡು ಜಾತಿಗಳ ಸಹಾಯದಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಜಾತಿಪದ್ಧತಿಯನ್ನು ಕಿತ್ತೆಸೆಯದಿದ್ದರೆ ಬಿಹಾರದ ಸಾಮಾಜಿಕ ಬೆಳವಣಿಗೆ ಕುಂಠಿತಗೊಳ್ಳಲಿದೆ", ಎಂದು ಎಚ್ಚರಿಗೆ ನೀಡಿದ್ದಾರೆ.