ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ರಾಹುಲ್, ಸರ್ಕಾರ ತಾವು ಚರ್ಚೆಗೆ ಸಿದ್ಧ ಎಂದು ಹೇಳುತ್ತದೆ. ಆದರೆ ಅವರು ನನಗೆ ಸದನದಲ್ಲಿ ಮಾತನಾಡಲು ಬಿಡುವುದಿಲ್ಲ. ನಾನು ಸದನದಲ್ಲಿ ಮಾತನಾಡಲು ಸಿದ್ಧ, ಆದರೆ ಅವರದಕ್ಕೆ ಅವಕಾಶ ನೀಡುವುದಿಲ್ಲ. ನಾನೇನು ಮಾತನಾಡುತ್ತೇನೆ ಎಂಬ ಆತಂಕ , ಭಯ ಅವರನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಇಂದು ಅಧಿಕೃತವಾಗಿ ಆರಂಭವಾದ ಸಂಸತ್ ಅಧಿವೇಶನ ಮೂರು ಸಲ ಮುಂದೂಡಲ್ಪಟ್ಟಿತು. ಸದನ ಪ್ರಾರಂಭವಾಗುತ್ತಿದ್ದಂತೆ ಬಿಎಸ್ಪಿ ನಾಯಕಿ ಮಾಯಾವತಿ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಎತ್ತಿಕೊಂಡು ಉತ್ತರಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಲ್ಲಾ ವಿರೋಧ ಪಕ್ಷಗಳು ಇದೇ ವಿಷಯವನ್ನಿಟ್ಟುಕೊಂಡು ಕೋಲಾಹಲವನ್ನು ಪ್ರಾರಂಭಿಸಿದವು.