ಮೋದಿಯ ಕಾಂಗ್ರಸ್ಸಿನಲ್ಲಿ ಆರ್ವಿಎಸ್ಪಿ ಮಾದರಿ (RVSP- ರಾಹುಲ್, ಸೋನಿಯಾ, ವಾಧ್ರಾ,ಪ್ರಿಯಾಂಕಾ) ಎಂಬ ಹೇಳಿಕೆಗೆ ಉತ್ತರವಾಗಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನು 'ಭಾರತವನ್ನು ಸುಡುವ (ಜಲಾವೋ) ಪಾರ್ಟಿ' ಎಂದು ಟೀಕಿಸಿದ್ದಾರೆ.
'ಮೋದಿ ಪರ ಗಿರಿರಾಜ್ ಸಿಂಗ್ರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ಸಿಂಗ್ ಹೇಳಿಕೆಗಳು
ಬಿಜೆಪಿ ಸಮುದಾಯಗಳ ನಡುವೆ ಬಿರುಕು ಉಂಟುಮಾಡುವ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರವನ್ನು ವಿಭಾಗಿಸುವ ಸಿದ್ಧಾಂತದಲ್ಲಿ ನಂಬಿಕೆ ಇಡುತ್ತದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಆದರೆ ಇಂದು ನಾನು ಗುಜರಾತ್ ಅಭಿವೃದ್ಧಿ ಬಗ್ಗೆ ಮೋದಿ ಹೇಳಿರುವ ಸುಳ್ಳು ಮತ್ತು ತಪ್ಪು ದಾರಿಗೆ ಎಳೆಯುವ ಪ್ರಚಾರದ ವಿರುದ್ಧ ಮಾತನಾಡಲು ಇಲ್ಲಿಗೆ ಬಂದಿದ್ದೇನೆ' ಎಂದು ಸಿಂಘ್ವಿ ಹೇಳಿದರು.