ಪ್ರತಿದಿನ ವಜ್ರ, ಬಂಗಾರ, ಎಟಿಎಂ ತಿನ್ನೋಕಾಗುತ್ತಾ?ಪ್ರತಿ ದಿನ ನೀತಿ ಬದಲಾಗುತ್ತಿರುವುದರಿಂದ ದೇಶದ ಜನತೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೊಂದಿರುವ ಭ್ರಷ್ಟರು ನೆಮ್ಮದಿಯಾಗಿದ್ದಾರೆ. ಆದರೆ. ಬಡವರು ಸಣ್ಣ ವ್ಯಾಪಾರಿಗಳು, ಉದ್ಯೋಗಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತರಲಾಗದ ಕೇಂದ್ರ ಸರಕಾರ ತನ್ನದೇ ದೇಶದ ಜನತೆಯ ವಿರುದ್ಧ ಸಮರ ಸಾರಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.