ನರೇಂದ್ರ ಮೋದಿ ಜೀವಕ್ಕೆ ಯಾವ ಬೆದರಿಕೆಯೂ ಇಲ್ಲ: ಸುಶೀಲ್ ಕುಮಾರ್ ಶಿಂಧೆ
ಶನಿವಾರ, 3 ಮೇ 2014 (16:45 IST)
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜೀವಕ್ಕೆ ಯಾವ ಬೆದರಿಕೆಯೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು "ಮೋದಿಯ ಜೀವಕ್ಕೆ ಬೆದರಿಕೆ ಇದೆ ಎಂಬ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ ಮತ್ತು ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಭಾರತ ಸರ್ಕಾರ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ತಿಳಿಸಿದ್ದಾರೆ.
"ಮೋದಿ ಜೀವಕ್ಕೆ ಅಪಾಯವಿದೆ ಎಂಬುದು ಭಾರತೀಯ ಜನತಾ ಪಕ್ಷದ ನಾಯಕರಿಂದ ಹಬ್ಬಿಸಲ್ಪಟ್ಟಿರುವ ಪ್ರಚಾರ ಸಿದ್ಧಾಂತ" ಎಂದು ಶಿಂಧೆ ಹೇಳಿದ್ದಾರೆ.
ತಮ್ಮ ನಾಯಕರು ಅಪಾಯದಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೊಂಡ ಮಾರನೇ ದಿನ ಶಿಂಧೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಗೌಹಾತಿಗೆ ಹೊರಟಿದ್ದ ಬೆಂಗಳೂರು ಎಕ್ಸಪ್ರೆಸ್ ರೈಲಿನಲ್ಲಿ ಅವಳಿ ಸ್ಫೋಟವಾದ ನಂತರ ಕೇಸರಿ ಪಕ್ಷ ತಮ್ಮ ಪಕ್ಷದ ನಾಯಕರ ಜೀವಕ್ಕೆ ಅಪಾಯವಿದೆ ಎಂಬ ಭಯವನ್ನು ವ್ಯಕ್ತಪಡಿಸಿತ್ತು.