ಭಾವಿ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ನ್ಯಾಯ ತರುವ ಬಗ್ಗೆ ಗಂಭೀರ ನಿಲುವು ತಳೆದಿದ್ದಾರೆ ಎನ್ನುವುದು ನಿಜವಾದರೆ, ಮೊದಲು ಅವರು ಕಾಶ್ಮೀರದ ಜನರಿಗೆ ಅನ್ಯಾಯವಾಗಿದೆ ಎಂಬುದನ್ನು ಸ್ವೀಕರಿಸ ಬೇಕು ಎಂದು ಹುರ್ರಿಯತ್ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಹೇಳಿದ್ದಾರೆ.
"ಕಾಶ್ಮೀರಿಗಳ ಪರ ನ್ಯಾಯ ತೀರ್ಮಾನವಾದರೆ, ಅದು ನಿಜವಾಗಿಯೂ ಭಾರತೀಯರು ಮತ್ತು ಏಷ್ಯನ್ನರ ಪಾಲಿಗೆ ಕಲ್ಯಾಣಕರವಾಗಿರುತ್ತದೆ. ಪರಿಣಾಮ ಇಡೀ ದಕ್ಷಿಣ ಏಷ್ಯಾ ಪ್ರಾಂತದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಯ ಹೊಸ ಯುಗ ಪ್ರಾರಂಭವಾಗುತ್ತದೆ " ಎಂದು ಗಿಲಾನಿ ಅಭಿಪ್ರಾಯ ಪಟ್ಟಿದ್ದಾರೆ.