ಹೊಸದಾಗಿ ಜಾರಿಯಲ್ಲಿ ತಂದಿರುವ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ ಕುರಿತು ಅರಿವು ಮೂಡಿಸಲು ಪ್ರಧಾನಿ ನಾಲ್ಕು ರಾಜ್ಯಗಳಲ್ಲಿ ಇಂತಹದ್ದೇ ನಾಲ್ಕು ಬೃಹತ್ ರೈತ ಸಮ್ಮೇಳನಗಳನ್ನು ನಡೆಸಲಿದ್ದು, ಅವುಗಳಲ್ಲಿ ಮೊದಲನೆಯದು ಇದಾಗಿದೆ. ಈ ಯೋಜನೆ ಅಡಿಯಲ್ಲಿ ನೈಸರ್ಗಿಕ ವಿಪತ್ತು, ಇತರೆ ವಿಕೋಪಗಳು ಮತ್ತು ಕೀಟದಾಳಿಗಳಿಂದ ಬೆಳೆ ಹಾನಿ ಮತ್ತು ನಾಶವಾದರೆ ರೈತ ಸಮುದಾಯಕ್ಕೆ ವಿಮೆ ಮತ್ತು ಆರ್ಥಿಕ ಭದ್ರತೆಯನ್ನು ನೀಡಲಾಗುತ್ತದೆ.