ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನದಿಂದ ಸನ್ಮಾನಿತರಾಗಿದ್ದ, ಕಲಾಂ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ಮೋದಿ ತಮ್ಮ ಬ್ಲಾಗ್ನಲ್ಲಿ "ಭಾರತ ತನ್ನ ರತ್ನವನ್ನು ಕಳೆದುಕೊಂಡಿದೆ", ಎಂದು ಉದ್ಘರಿಸಿದ್ದರು.
"ನಮ್ಮ ವಿಜ್ಞಾನಿ-ರಾಷ್ಟ್ರಪತಿ - ಜನಸಾಮಾನ್ಯರ ಪ್ರಾಮಾಣಿಕ ಪ್ರೀತಿಯನ್ನು, ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ವಸ್ತು ಆಸ್ತಿ ಮೂಲಕ ಯಶಸ್ಸನ್ನು ಅವರೆಂದೂ ಅಳೆಯಲಿಲ್ಲ", ಎಂದು ಪ್ರಧಾನಿ ,ಕಲಾಂ ಅವರನ್ನು ನೆನಪಿಸಿಕೊಂಡಿದ್ದಾರೆ.