"ಭಾರತದ ಪ್ರಧಾನಮಂತ್ರಿಗಳ ಹೆಸರಿನಲ್ಲಿ ಕೇವಲ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಕುರಿತಷ್ಟೇ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಆದರೆ ನಾವು ಪಠ್ಯಪುಸ್ತಕದಿಂದ ದೂರ ಇಡಲ್ಪಟ್ಟಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಇತರ ಪ್ರಧಾನಿಗಳ ಕುರಿತು ಮಕ್ಕಳಿಗೆ ತಿಳಿಸ ಬಯಸುತ್ತೇವೆ" ಎಂದು ರಾಜಸ್ಥಾನದ ಶಿಕ್ಷಣ ಮಂತ್ರಿ ಕಾಲೀಚರಣ್ ಸರಾಫ್ ಹೇಳಿದ್ದಾರೆ.