ನವದೆಹಲಿಯಲ್ಲಿ ಪತ್ರಿಕಾ ಪ್ರತಿನಿಧಿಗಳಿಗೆ ಮೋದಿ ಚಹಾಕೂಟ

ಶನಿವಾರ, 25 ಅಕ್ಟೋಬರ್ 2014 (11:57 IST)
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 5 ತಿಂಗಳಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಕರ್ತರಿಗೆ ಮತ್ತು ಸಂಪಾದಕರಿಗೆ ಟೀ ಪಾರ್ಟಿ ಆಯೋಜಿಸಿದ್ದು, ಸಾಕಷ್ಟು ಪತ್ರಕರ್ತರು ಆಗಮಿಸಿದ್ದಾರೆ.  ಬಿಜೆಪಿ ಕೇಂದ್ರ ಕಚೇರಿಯಲ್ಲಿ ಟೀ ಪಾರ್ಟಿ ಮತ್ತು ಪತ್ರಕರ್ತರ ಜೊತೆ ಸಂವಾದವನ್ನು ಆಯೋಜಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು ಕೂಡ ಟೀ ಪಾರ್ಟಿಯಲ್ಲಿ ಉಪಸ್ಥಿತರಿರುತ್ತಾರೆ.

 ಸರ್ಕಾರದ 5 ತಿಂಗಳ ಸಾಧನೆ ಬಗ್ಗೆ ಮೋದಿ ಹೇಳಿಕೆ ನೀಡುವರೆಂದು ಭಾವಿಸಲಾಗಿದೆ. ಸುಮಾರು 550 ಪತ್ರಕರ್ತರೊಂದಿಗೆ ಪ್ರಧಾನಿ ಚಹಾ ಕೂಟ ಆಯೋಜಿಸಿದ್ದಾರೆ.  ದೀಪಾವಳಿ ಮಿಲನ್ ಎಂದು ಕರೆಯಲಾಗುವ ಈ ಚಹಾಕೂಟದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಹಾ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ , ಸುಷ್ಮಾ ಸ್ವರಾಜ್ ಭಾಗವಹಿಸಿದ್ದಾರೆ.  11 ಗಂಟೆಯಿಂದ ಒಂದು ಗಂಟೆವರೆಗೆ ಈ ಚಹಾಕೂಟ ನಡೆಯಲಿದೆ.

ಈಗಷ್ಟೇ ನರೇಂದ್ರ ಮೋದಿ ಟೀಪಾರ್ಟಿಗೆ ಆಗಮಿಸಿದ್ದು, ಇನ್ನು 1 ಗಂಟೆವರೆಗೆ ಪತ್ರಕರ್ತರೊಂದಿಗೆ ಸಂವಾದ ಆರಂಭಿಸಲಿದ್ದಾರೆ. ಪತ್ರಕರ್ತರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಮೋದಿ ಸೂಕ್ತ ಉತ್ತರ ನೀಡುವರೆಂದು ನಿರೀಕ್ಷಿಸಲಾಗಿದೆ. ತಮ್ಮ ಸರ್ಕಾರದ ಇದುವರೆಗಿನ ಸಾಧನೆ ಮತ್ತು ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಮೋದಿ ಪತ್ರಕರ್ತರಿಗೆ ಮನದಟ್ಟು ಮಾಡಲಿದ್ದಾರೆ. 
 

ವೆಬ್ದುನಿಯಾವನ್ನು ಓದಿ