ನಿರ್ಮಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾವಲ್, ಕಲ್ಲುಗಳ ಮೇಲೆ ರಾಮ ಎಂದು ಬರೆದ ಮಾತ್ರಕ್ಕೆ ಸಮುದ್ರದಲ್ಲಿ ತೇಲಿದಂತೆ, ಮೋದಿ ಹೆಸರಿನಿಂದಲೇ ಬಿಜೆಪಿ 2014ರ ಲೋಕಸಭೆ ಚುನಾವಣೆ ಗೆಲ್ಲುವಂತಾಯಿತು ಎಂದಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಕುರಿತಂತೆ ಮಾತನಾಡಿದ ಅವರು, ಸುರಕ್ಷತಾ ಪಡೆಗಳಿಂದ ಸುತ್ತುವರಿದವರು, ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ವ್ಯಕ್ತಿಗಳು ಅಸಹಿಷ್ಣುತೆ ಬಗ್ಗೆ ಮಾತನಾಡುವುದು ಅಚ್ಚರಿ ತಂದಿದೆ ಎಂದರು.