ಭೂಕಂಪ ಸಂಭವಿಸಲು ಕಾರಣ ನರೇಂದ್ರ ಮೋದಿ !

ಶುಕ್ರವಾರ, 22 ಮೇ 2015 (11:12 IST)
'ಭಾರತದ ಅನೇಕ ಭಾಗಗಳಲ್ಲಿ ಭೂಕಂಪ ಸಂಭವಿಸಲು ಪ್ರಧಾನಿ ನರೇಂದ್ರ ಮೋದಿಯವರು ಕಾರಣರಂತೆ'. ಇಂತಹ ಅಸಂಬದ್ಧ ಹೇಳಿಕೆಯನ್ನು ನೀಡಿದವರು ಇನ್ಯಾರೂ ಅಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್. 

"ದೇಶ ಎದುರಿಸುತ್ತಿರುವ ಅಸಂಖ್ಯ ಸಮಸ್ಯೆಗಳನ್ನು ಕಡೆಗಣಿಸಿ ನರೇಂದ್ರ ಮೋದಿಯವರು ವಿದೇಶಗಳಲ್ಲಿ ಸುತ್ತುತ್ತಿರುತ್ತಾರೆ. ಈ ಕಾರಣಕ್ಕೆ ದೇಶ ಭೂಕಂಪನಕ್ಕೆ ಸಿಲುಕಿತು", ಎಂದು ಲಾಲು ಹೇಳಿದ್ದಾರೆ. 
 
"ಮೋದಿ ಸರಕಾರ ಅಧಿಕಾರಕ್ಕೇರಿ ಒಂದು ವರ್ಷ ಮುಗಿದಿದೆ. ಆದರೆ ದೇಶದಲ್ಲಿ ಎಲ್ಲಿಯೂ ವಿಕಾಶದ ಅಲೆ ಕಾಣಿಸುತ್ತಿಲ್ಲ. ದೇಶವಾಸಿಗಳು ಹಣದುಬ್ಬರದ ಜತೆ ಸೆಣಸಾಡುತ್ತಿದ್ದಾರೆ. ಪಾತ್ರೆಯಿಂದ ಬೇಳೆ ಮಾಯವಾಗಿದೆ.  ಆದರೆ ಈ ಕುರಿತು ಚಿಂತೆ ಇಲ್ಲದ ಮೋದಿ ಅನ್ಯದೇಶಗಳಿಗೆ ಪ್ರವಾಸ ಹೋಗುತ್ತಿದ್ದಾರೆ", ಎಂದು ಲಾಲು ಆರೋಪಿಸಿದ್ದಾರೆ. 
 
"ಮೋದಿಯವರು ಆನಿವಾಸಿ ಭಾರತೀಯರಾಗಿ ಬಿಟ್ಟಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ಕೇವಲ ಧೋತಿ ಮತ್ತು ಕುರ್ತಾ ಧರಿಸಿ ವಿದೇಶ ಪ್ರವಾಸ ಮಾಡುತ್ತಿದ್ದರು. ಆದರೆ ಮೋದಿಯವರು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ", ಎಂದು ಲಾಲು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ