"ಮೋದಿ ಸರಕಾರ ಅಧಿಕಾರಕ್ಕೇರಿ ಒಂದು ವರ್ಷ ಮುಗಿದಿದೆ. ಆದರೆ ದೇಶದಲ್ಲಿ ಎಲ್ಲಿಯೂ ವಿಕಾಶದ ಅಲೆ ಕಾಣಿಸುತ್ತಿಲ್ಲ. ದೇಶವಾಸಿಗಳು ಹಣದುಬ್ಬರದ ಜತೆ ಸೆಣಸಾಡುತ್ತಿದ್ದಾರೆ. ಪಾತ್ರೆಯಿಂದ ಬೇಳೆ ಮಾಯವಾಗಿದೆ. ಆದರೆ ಈ ಕುರಿತು ಚಿಂತೆ ಇಲ್ಲದ ಮೋದಿ ಅನ್ಯದೇಶಗಳಿಗೆ ಪ್ರವಾಸ ಹೋಗುತ್ತಿದ್ದಾರೆ", ಎಂದು ಲಾಲು ಆರೋಪಿಸಿದ್ದಾರೆ.
"ಮೋದಿಯವರು ಆನಿವಾಸಿ ಭಾರತೀಯರಾಗಿ ಬಿಟ್ಟಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ಕೇವಲ ಧೋತಿ ಮತ್ತು ಕುರ್ತಾ ಧರಿಸಿ ವಿದೇಶ ಪ್ರವಾಸ ಮಾಡುತ್ತಿದ್ದರು. ಆದರೆ ಮೋದಿಯವರು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ", ಎಂದು ಲಾಲು ಕಿಡಿ ಕಾರಿದ್ದಾರೆ.