ಸೂರತ್ ವಜ್ರ ವ್ಯಾಪಾರಿ, ಬಿಲ್ಡರ್, ಖಾಸಗಿ ವಿಮಾನಯಾನ ಸಂಸ್ಥೆಯ ಮಾಲೀಕರಾದ ಲಾವಜಿಭಾಯಿ ಪಟೇಲ್, ವೃಂದಾವನದ ವಾತ್ಸಲ್ಯ ಗ್ರಾಮಕ್ಕೆ ಭೇಟಿ ನೀಡಿದಾಗ ಅಚ್ಚರಿಯ ಘೋಷಣೆ ಮಾಡಿದ್ದಾರೆ.
ಬಡಮಕ್ಕಳ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ವಾತ್ಸಲ್ಯ ಗ್ರಾಮ ಸಂಸ್ಥೆಯ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಹಾಜರಾಗಿದ್ದ ಲಾವಜಿ ಪಟೇಲ್, ಸಾಧ್ವಿ ರಿತಂಬರಾ ಕಾರ್ಯಕ್ಷಮತೆ ಕಂಡು ಸ್ಪೂರ್ತಿಗೊಂಡಿದ್ದೇನೆ. ಕೇಂದ್ರ ಸರಕಾರ ಘೋಷಿಸಿದ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮಕ್ಕೆ 200 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಲಾವಜಿ ಪಟೇಲ್ ಬಾದ್ಶಾ, ಇದು ಮೊದಲ ಬಾರಿಗೆ ನೀಡುತ್ತಿರುವ ದೇಣಿಗೆಯಲ್ಲ. ಕಳೆದ ವರ್ಷ ಪಟಿದಾರ್ ಸಮುದಾಯದ ಕುಟುಂಬಗಳ 5 ಸಾವಿರ ನವಜಾತ ಶಿಶುಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳ ಬಾಂಡ್ ನೀಡಿದ್ದರು. ಬಾಲಕಿಯರು 21 ವರ್ಷದವರಾದಾಗ 2 ಕೋಟಿ ರೂಪಾಯಿ ಪ್ರೀಮಿಯಂ ಹಣವನ್ನು ಪಡೆಯುತ್ತಾರೆ.