ಬುಧವಾರ ಸಂಜೆ ತನ್ನ ಅತ್ತೆಯ ಜತೆ ಹೊಲಕ್ಕೆ ಹೋಗಿದ್ದ ಬಾಲಕ ಕೃಷ್ಣ, ಆಕೆ ಗಿಡಗಳಿಂದ ತರಕಾರಿಗಳನ್ನು ಆಯ್ದುಕೊಳ್ಳುತ್ತಿದ್ದಾಗ ಅಲ್ಲೇ ಸಮೀಪ ಆಟವಾಡುತ್ತ ಕುಳಿತಿದ್ದ. ಸ್ವಲ್ಪ ಮುಂದೆ ನಡೆದು ಹೋದ ಆತ ಅಲ್ಲೇ ಇದ್ದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ. ದಮ್ಮು ಆದಿವಾಸಿ ಎಂಬುವವರಿಗೆ ಸೇರಿದ ಹೊಲದಲ್ಲಿ ಕೆಲ ದಿನಗಳ ಹಿಂದೆ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಜಿಲ್ಲಾಡಳಿತ ಕಾರ್ಯಾಚರಣೆಯನ್ನು ನಡೆಸಿದ್ದರು. ಆದರೆ 100 ಅಡಿ ಆಳದಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗೆ ನಡೆಸಿದ ಸರ್ವ ಪ್ರಯತ್ನಗಳು ವಿಫಲವಾದವು. ಗುರುವಾರ ರಾತ್ರಿ 8.50ಕ್ಕೆ ಆತನನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ,ಆದರೆ ಬಾಲಕ ಬದುಕುಳಿದಿಲ್ಲ ಎಂದು ವೈದ್ಯರು ಘೋಷಿಸಿದರು.