'ಕೈ' ತೊರೆಯುವವರು 'ಧೋಬಿ ಕಾ ಕುತ್ತಾ' ಅಂತೆ

ಮಂಗಳವಾರ, 25 ಅಕ್ಟೋಬರ್ 2016 (19:29 IST)
ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವವರು 'ಧೋಬಿ ಕಾ ಕುತ್ತಾ' ಎನ್ನುವುದರ ಮೂಲಕ ಕಾಂಗ್ರೆಸ್ ನಾಯಕ ಕಾಂತಿಲಾಲ್ ಭುರಿಯಾ ಮತ್ತೊಂದು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 

ಜಬುವಾದಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ, ಕಾಂತಿಲಾಲ್, ತನ್ನ ಮನೆಯನ್ನು ತೊರೆದವರು ಮತ್ತೆಲ್ಲೂ ಏನನ್ನೂ ಪಡೆಯಲಾರರು ಎಂಬುದನ್ನು ಇತಿಹಾಸ ಸಾಬೀತು ಪಡಿಸಿದೆ. 'ಧೋಬಿ ಕಾ ಕುತ್ತಾ'  ಈ ಹಳೆಯ ನುಡಿಗಟ್ಟು ಇಂತವರಿಗೆ ಪ್ರಸ್ತುತ. ಕಾಂಗ್ರೆಸ್ ಸಮುದ್ರದಂತೆ, ಇಂತಹವುಗಳಿಂದ ಬಾಧಿತವಾಗುವುದಿಲ್ಲ ಎಂದು ಭುರಿಯಾ ಹೇಳಿದ್ದಾರೆ. 
 
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಹೆಚ್ಚಿನ ಬಲ ಪಡೆಯುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. 
 
ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ರಾಮನಾಮ ನೆನಪಾಗುತ್ತದೆ ಎಂದು ಕಮಲ ಪಕ್ಷದವರನ್ನವರು ಟೀಕಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ