ಸಂಸತ್ತಿನ ಕ್ಯಾಂಟಿನ್‌ನಲ್ಲಿ ಕಳಪೆ ಆಹಾರ: ಸಭಾಪತಿಗೆ ಸಂಸದರ ದೂರು

ಬುಧವಾರ, 30 ಜುಲೈ 2014 (15:50 IST)
ಸಂಸತ್ತಿನಲ್ಲಿ ದೊರೆಯುತ್ತಿರುವ ಆಹಾರ ಕಳಪೆ ಮಟ್ಟದ್ದಾಗಿದೆ ಎಂದು ರಾಜ್ಯಸಭೆಯ ಸದಸ್ಯರು ಲೋಕಸಭೆಯ ಸಭಾಪತಿಯವರಿಗೆ ದೂರು ಸಲ್ಲಿಸಿದ್ದಾರೆ.
 
ಜೆಡಿಯು ಸಂಸದ ಕೆ.ಸಿ.ತ್ಯಾಗಿ ಮತ್ತು ಸಮಾಜವಾದಿ ಪಕ್ಷದ ಸಂಸದ ರಾಮ್‌ ಗೋಪಾಲ್ ಯಾದವ್ ಮತ್ತು ಜಯಾ ಬಚ್ಚನ್ ಕೂಡಾ ಸಂಸತ್ತಿನಲ್ಲಿ ನೀಡಲಾಗುತ್ತಿರುವ ಆಹಾರ ತೀರಾ ಕಳಪೆ ಮಟ್ಟದಾಗಿದ್ದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ಕೂಡಾ ಸಂಸತ್ತಿನ ಕ್ಯಾಂಟಿನ್‌ನಿಂದ ಸರಬರಾಜು ಮಾಡುತ್ತಿರುವ ಆಹಾರ ಸೇವಿಸಿದ ಕೂಡಲೇ ಅನಾರೋಗ್ಯ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
 

ವೆಬ್ದುನಿಯಾವನ್ನು ಓದಿ