ಬೀದಿನಾಯಿಯೊಂದಿಗೆ ರಸ್ತೆಯಲ್ಲಿ ಸೆಕ್ಸ್ ನಡೆಸುತ್ತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ ಬಾಲಕರು

ಶನಿವಾರ, 18 ಏಪ್ರಿಲ್ 2015 (14:48 IST)
ಬೀದಿನಾಯಿಯೊಂದಿಗೆ ಹಗಲು ಹೊತ್ತಿನಲ್ಲಿಯೇ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದ ಆರೋಪಿಯ ಕೃತ್ಯವನ್ನು ಸಹಿಸದೆ ಹತ್ಯೆ ಮಾಡಿದ್ದೇವೆ. ಹತ್ಯೆಯ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಇಬ್ಬರು ಯುವಕರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಶಿವಾಜಿ ನಗರದ ಗೋವಂಡಿ ಪ್ರದೇಶದ ನಿವಾಸಿಯಾಗಿದ್ದ 48 ವರ್ಷ ವಯಸ್ಸಿನ ರಮಾಶಂಕರ್ ದುಬೆ, ಜನರೊಂದಿಗೆ ಆತ್ಮಿಯವಾಗಿದ್ದ ಬೀದಿನಾಯಿಗಳು ಇತರ ಪ್ರಾಣಿ ಪಕ್ಷಗಳ ಬಗ್ಗೆ ತುಂಬಾ ಅನುಕಂಪ ಹೊಂದಿದ್ದ. ಆದರೆ, ಆದರ ಹಿಂದಿನ ಮುಖವಾಡ ಇದೀಗ ಕಳಚಿದೆ.

15 ರಿಂದ 17 ವರ್ಷ ವಯಸ್ಸಿನ ಇಬ್ಬರು ಬಾಲಕರು ಪ್ರಾಣಿಪ್ರಿಯರಾಗಿದ್ದರು. ಆರೋಪಿ ದುಬೆ ಬೀದಿನಾಯಿಯೊಂದಿಗೆ ಹಗಲು ಹೊತ್ತಿನಲ್ಲಿ ರಸ್ತೆ ಮಧ್ಯದಲ್ಲಿಯೇ ಸೆಕ್ಸ್‌‌ನಲ್ಲಿ ಪಾಲ್ಗೊಂಡಿರುವುದನ್ನು ಕಂಡು ದುಬೆಯ ವರ್ತನೆಯನ್ನು ಪ್ರಶ್ನಿಸಿದ್ದಾರೆ. ವಾಗ್ವಾದ ವಿಕೋಪಕ್ಕೆ ತೆರಳಿದಾಗ ಯುವಕರು ಲಾಠಿಯಿಂದ ಆರೋಪಿಯನ್ನು ಥಳಿಸಿದ್ದಾರೆ. ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ದುಬೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.‌

ಶಿವಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಬೆಳಿಗ್ಗೆ 8 ಗಂಟೆಗೆ ಫುಟ್ಪಾತ್‌ನಲ್ಲಿ ಶವವೊಂದು ಬಿದ್ದಿರುವುದಾಗಿ ಮಾಹಿತಿ ಬಂದಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ರಾಜಾವಾಡಿ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗಾಗಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೋಸ್ಟ್‌ಮಾರ್ಟಂ ವರದಿಯ ಪ್ರಕಾರ, ಆರೋಪಿ ದುಬೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ರಮಾಕಾಂತ್ ದುಬೆಯನ್ನು ತಾವೇ ಹತ್ಯೆ ಮಾಡಿರುವುದಾಗಿ ಇಬ್ಬರು ಬಾಲಕರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ