ಮಂಡಳಿಯ ಈ ವಿಗ್ರಹಕ್ಕೆ ಕಳೆದ ವರ್ಷ, ರೂಪಾಯಿ 223 ಕೋಟಿ ವಿಮೆ ಮಾಡಲಾಗಿತ್ತು.
5 ದಿನಗಳ ಕಾಲ ಮೂರ್ತಿಯನ್ನು ಪೂಜಿಸಲಾಗುತ್ತಿದ್ದು, ಪ್ರತಿದಿನದ ಲೆಕ್ಕಾಚಾರದಲ್ಲಿ ದಿನವೊಂದರ ವಿಮೆ 51. 7 ಕೋಟಿ ರೂ. ಎಂದು ವರದಿಯಾಗಿದೆ. ಈ ಮೂರ್ತಿಗೆ 22 ಕೋಟಿ ರೂಪಾಯಿಯ ಚಿನ್ನದಿಂದ ಅಲಂಕರಿಸಲಾಗುವುದು.
ಜಿಎಸ್ಬಿ ಸೇವಾ ಮಂಡಲದ ಗಣಪತಿ ವಿಗ್ರಹ,ಮಂಟಪ, ಬಂಗಾರ ಮತ್ತು ಭಕ್ತರನ್ನು ಬೆಂಕಿ, ಭಯೋತ್ಪಾದಕ ದಾಳಿ, ಗಲಭೆಗಳಂತಹ ಅಪಾಯಗಳಿಂದ ರಕ್ಷಿಸಲು ಈ ವಿಮೆಯನ್ನು ಮಾಡಿಸಲಾಗಿದೆ.
ಹಿಂದುಗಳ ಆರಾಧ್ಯ ದೈವ ವಿನಾಯಕ, ಆನೆಮುಖವನ್ನು ಪಡೆದು ಮರುಜನ್ಮ ಹೊಂದಿದ ಶುಭದಿನದ ಆಚರಣೆಯಾದ ಗಣೇಶ ಚತುರ್ಥಿಯನ್ನು ದೇಶಾದ್ಯಂತ ಬರುವ ಶುಕ್ರವಾರದಿಂದ ಆಚರಿಸಲಾಗುತ್ತಿದ್ದು, ಕೆಲವೆಡೆ 10 ದಿನಗಳಿಂದ 21 ದಿನಗಳ ಕಾಲ ಕೂಡ ಹಬ್ಬವನ್ನು ಆಚರಿಸಲಾಗುತ್ತದೆ.