ತಂದೆಯನ್ನು ಹತ್ಯೆಗೈದವನನ್ನು 20 ವರ್ಷಗಳ ನಂತ್ರ ಕೊಂದ ಪುತ್ರ

ಬುಧವಾರ, 26 ಜುಲೈ 2017 (19:50 IST)
ಮೈದಾವಾಸ್ ಗ್ರಾಮದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಎರಡು ಕುಟುಂಬಗಳ ನಡುವೆ ನಡೆದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಇಂದು 47 ರ ಹರೆಯದ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. 
 
ಘಟನೆಯಲ್ಲಿ ಸತ್ತ ರಾಜ್‌‍ಕುಮಾರ್, ಅಲಿಯಾಸ್ ರಾಜು 20 ವರ್ಷಗಳ ಹಿಂದೆ ದೀಪಕ್ ಕುಮಾರ್ ಅವರ ತಂದೆಯ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆರೋಪಿ ದೀಪಕ್ (24) ವಿರುದ್ಧ ರಾಜಕುಮಾರ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಎಂದು ದಾಖಲಿಸಲಾಗಿದೆ.
 
ರಿಯಲ್ ಎಸ್ಟೇಟ್ ಉದ್ಯಮಿ ರಾಜಕುಮಾರ್, ಸೋಹ್ನಾ ರಸ್ತೆಯಲ್ಲಿರುವ ಬಾದಶಾಹಪುರ್‌‌ದ ತನ್ನ ಕಚೇರಿಯಿಂದ ಮೈದಾವಾಸ್ ಗ್ರಾಮಕ್ಕೆ ರಾತ್ರಿ 11 ಗಂಟೆಗೆ ವಾಪಸಾಗುತ್ತಿದ್ದಾಗ ಅವರ ಕಾರು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಎಂಟು ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ