ತ್ರೇತಾಯುಗದಲ್ಲಿ ಶ್ರವಣಕುಮಾರ ತನ್ನ ವೃದ್ಧ ತಂದೆತಾಯಿಗಳನ್ನು ಎರಡು ಬುಟ್ಟಿಗಳಲ್ಲಿಟ್ಟುಕೊಂಡು ತೀರ್ಥಯಾತ್ರೆಗೆ ಕೊಂಡೊಯ್ದ ಕತೆಯನ್ನು ಕೇಳಿಯೇ ಇರುತ್ತೀರಿ. ಇದು ಆಧುನಿಕ ಶ್ರವಣಕುಮಾರನ ನೈಜ ಕತೆ. ದೆಹಲಿಯ ಮುಸ್ಲಿಂ ಯುವಕನೊಬ್ಬ ತನ್ನ ತಂದೆತಾಯಿಗಳನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ರೂರ್ಕಿ ನಗರವನ್ನು ತಲುಪಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ.