ಪಾಕಿಸ್ತಾನ ಯೋಧರ ತಲೆಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಮುಸ್ಲಿಂ ಸಂಘಟನೆ!

ಮಂಗಳವಾರ, 9 ಮೇ 2017 (11:15 IST)
ನವದೆಹಲಿ: ಭಾರತೀಯ ಯೋಧರ ಶಿರಚ್ಛೇದ ನಡೆಸಿದ ಪಾಕಿಸ್ತಾನ ಸೈನಿಕರ ವಿರುದ್ದ ಭಾರತದಲ್ಲಿ ಭಾರೀ ಆಕ್ರೋಶವಿದೆ. ಇದೀಗ ಮುಸ್ಲಿಂ ಸಂಘಟನೆಯೊಂದು ಪಾಕ್ ಯೋಧರ ತಲೆ ಕಡಿದು ತರುವವರಿಗೆ ಬಹುಮಾನ ಘೋಷಿಸಿದೆ.

 
ದೆಹಲಿ ಮೂಲದ ಮುಸ್ಲಿಂ ಯುವ ಆತಂಕವಾದಿ ಸಮಿತಿ ಈ ಘೋಷಣೆ ಮಾಡಿದೆ. ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಸೈನಿಕರ ತಲೆ ಕಡಿದು ಭಾರತಕ್ಕೆ ತಂದವರಿಗೆ 5 ಕೋಟಿ ರೂ. ಇನಾಮು ನೀಡುವುದಾಗಿ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಶಕೀಲ್ ಸೈಫಿ ಹೇಳಿದ್ದಾರೆ.

ಇದಕ್ಕಾಗಿ ತಮ್ಮ ಸಂಘಟನೆಯ ಸದಸ್ಯರಿಂದ ಹಣ ಸಂಗ್ರಹ ಮಾಡುವುದಾಗಿ ಅವರು ಹೇಳಿದ್ದಾರೆ. ಕಳೆದ ವರ್ಷ ಸರ್ಜಿಕಲ್ ಸ್ಟ್ರೈಕ್ ಮಾಡಿದಂತೆ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದೇಶದ ಇತರ ಯುವಕರಂತೆ ಮುಸ್ಲಿಂ ಯುವಕರೂ ದೇಶಕ್ಕಾಗಿ ಎಂತಹ ತ್ಯಾಗ ಮಾಡಲೂ ಸಿದ್ಧ ಎಂದು ಅವರು ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ