ಕೇಂದ್ರ ಸರಕಾರ ಸಾಗುತ್ತಿರುವ ದಾರಿ ಸೂಕ್ತವಾಗಿದ್ದು, ಸರಕಾರ ಎಲ್ಲಾ ವಿಷಯಗಳಲ್ಲಿ ಶೇ,100 ಸಾಧನೆಗಳನ್ನು ಮಾಡದಿದ್ದರೂ ತೃಪ್ತಿ ತಂದಿದೆ ಸರಕಾರ ಕೇವಲ 14 ತಿಂಗಳದ್ದಾಗಿದ್ದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಧನೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದರು.
ಭಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶಗಳು ಸಹೋದರ ದೇಶಗಳು. ಆದರೆ, ಭಾರತ ಪಾಂಡವರಾದರೆ, ಪಾಕಿಸ್ತಾನ ಕೌರವರಂತೆ ಎಂದು ಆರೆಸ್ಸೆಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ವಾಗ್ದಾಳಿ ನಡೆಸಿದರು.