ಹೇಮಾಮಾಲಿಗೆ ಚಿಕಿತ್ಸೆ ನೀಡಿದಂತೆ ನನ್ನ ಪುತ್ರಿಗೆ ನೀಡಿದ್ರೆ ಬದುಕುತ್ತಿದ್ದಳು: ಮೃತ ಬಾಲಕಿಯ ತಂದೆ

ಶುಕ್ರವಾರ, 3 ಜುಲೈ 2015 (20:20 IST)
ಕಾರು ಅಪಘಾತದಲ್ಲಿ ಗಾಯಗೊಂಡ ಮಥುರಾ ಕ್ಷೇತ್ರದ ಸಂಸದೆ ಹೇಮಾಮಾಲಿನಿಯವರಿಗೆ ನೀಡಿದ ರೀತಿಯಲ್ಲಿ ನನ್ನ ಮಗಳಿಗೆ ಚಿಕಿತ್ಸೆ ನೀಡಿದಲ್ಲಿ ಬದುಕುವ ಸಾಧ್ಯತೆಗಳಿದ್ದವು ಎಂದು ಅಪಘಾತದಲ್ಲಿ ಮೃತಳಾದ ಪುತ್ರಿಯ ತಂದೆ ಹೇಳಿದ್ದಾರೆ.
 
ಲಾಲ್‌ಸೋತ್ ಪಟ್ಟಣದ ನಿವಾಸಿಯಾದ ಖಾಂಡೇಲ್‌ವಾಲ್ ಅವರಿಗೆ ಜೈಪುರ್‌ಗೆ ಭೇಟಿ ನೀಡುವುದು ಸಂತಸ ತರುವ ವಿಷಯವಾಗಿತ್ತು.ಆದರೆ ಸಂಸದೆ ಹೇಮಾಮಾಲಿನಿಯವರ ಮರ್ಸಿಡಿಸ್ ಕಾರಿಗೆ ಅವರ ಅಲ್ಟೋ ಕಾರು ಹೊಡೆದ ನಂತರ ಪುತ್ರಿ ಮೃತಳಾಗಿದ್ದರಿದ ಖಾಂಡೇಲ್‌ವಾಲ್ ಕುಟುಂಬದಲ್ಲಿ ಶೋಕಮನೆ ಮಾಡಿದೆ.   
 
ಖಾಂಡೇಲ್‌ವಾಲ್ ಕುಟುಂಬದಲ್ಲಿ ಕಿರಿಯಳಾಗಿದ್ದ ಚಿನ್ನ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾಳೆ. ಆದರೆ, ಕುಟುಂಬದ ನಾಲ್ವರು ಸದಸ್ಯರು ಗಾಯಗೊಂಡು ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸಂಸದೆ ಹೇಮಾಮಾಲಿನಿ ಪ್ರಯಾಣಿಸುತ್ತಿದ್ದ ಕಾರನ್ನು ಖಾಂಡೇಲ್‌ವಾಲಾ ಕುಟುಂಬ ವಶಕ್ಕೆ ತೆಗೆದುಕೊಂಡಿದೆ.
 
ಕಾರು ಅಪಘಾತವಾದ ನಂತರ ಹೇಮಾಮಾಲಿನಿಯವರನ್ನು ಜೈಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ನಮ್ಮನ್ನು ದೌಸಾದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಮೃತ ಬಾಲಕಿಯ ಕುಟುಂಬದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ