ಲೈಂಗಿಕ ಕಿರುಕುಳ: ಆಸಾರಾಮ್ ಬಾಪು ಪುತ್ರನಿಗೆ 3 ವಾರಗಳ ಜಾಮೀನು

ಸೋಮವಾರ, 25 ಮೇ 2015 (16:50 IST)
ಲೈಂಗಿಕ ಶೋಷಣೆ ಪ್ರಕರಣದಡಿಯಲ್ಲಿ ತಂದೆ, ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು ಜತೆ ಸೆರೆವಾಸವನ್ನು ಅನುಭವಿಸುತ್ತಿರುವ ನಾರಾಯಣ ಸಾಯಿಗೆ ಗುಜರಾತ್ ಹೈಕೋರ್ಟ್ ಇಂದು ಮೂರು ವಾರಗಳ ಜಾಮೀನು ನೀಡಿದೆ.  ಸೂರತ್ ಮೂಲದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಅವರು ಕಳೆದ ಒಂದು ವರ್ಷಗಳಿಗಿಂತ ಅಧಿಕ ಸಮಯದಿಂದ ಕಂಬಿ ಎಣಿಸುತ್ತಿದ್ದಾರೆ. 
ಆಸಾರಾಂ ಅವರ ಸೂರತ್ ಆಶ್ರಮದಲ್ಲಿ ತಂಗಿದ್ದ ವೇಳೆ( 2002- 2005) ನಾರಾಯಣ ಗುರು ನಿರಂತರವಾಗಿ ಅತ್ಯಾಚಾರ ಮಾಡಿದ್ದರು ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಳು. ಈ ಆಧಾರದ ಮೇಲೆ ಐಪಿಸಿಯ ವಿವಿಧ ವಿಭಾಗಗಳಡಿ ಆರೋಪಿಯ ಮೇಲೆ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಲೈಂಗಿಕ ಶೋಷಣೆ, ಅಕ್ರಮ ಬಂಧನ ಇವೇ ಮುಂತಾದ ಆರೋಪಗಳನ್ನು ಹೇರಲಾಗಿದೆ. 
 
ಗಮನಾರ್ಹ ವಿಷಯವೇನೆಂದರೆ ಆಕೆಯ ಹಿರಿಯ ಸಹೋದರಿ ನಾರಾಯಣ ಸಾಯಿ ತಂದೆ ಆಸಾರಾಂ ಬಾಪು  ತಾನು ಅಹಮದಾಬಾದ್‌ ಹೊರವಲಯದಲ್ಲಿರುವ ಅವರ ಆಶ್ರಮದಲ್ಲಿದ್ದಾಗ (2001- 2006) ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರತ್ಯೇಕವಾಗಿ ದೂರು ದಾಖಲಿಸಿದ್ದಳು. 

ವೆಬ್ದುನಿಯಾವನ್ನು ಓದಿ