ಅಸಾದುದ್ದೀನ್ ಓವೈಸಿ ಸಹೋದರರಾಗಿರುವ ಅಕ್ಬರುದ್ದೀನ್ ಓವೈಸಿ ಮಾತನಾಡಿ, ಕಳೆದ 200ರಲ್ಲಿ ಗುಜರಾತ್ನಲ್ಲಿ ದಂಗೆಯಾದಾಗ ಮೋದಿ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ದಂಗೆಯ ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಂಡು ಮೋದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸುತ್ತಿದ್ದಲ್ಲಿ ಮೋದಿ ಇಂದು ಪ್ರಧಾನಿಯಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅಧಿಕಾರವಹಿಸಿಕೊಂಡು 15 ತಿಂಗಳುಗಳು ಕಳೆದರೂ ಎಲ್ಲಿವೆ ಅಚ್ಚೇ ದಿನ್ ಎಂದು ಪ್ರಶ್ನಿಸಿದ ಅವರು, ಅನಿವಾಸಿ ಭಾರತೀಯ ಪ್ರಧಾನಿಯಾದ ಮೋದಿ, ನಮ್ಮ ದೇಶದ ಸಂವಿಧಾನದ ಬದಲಿಗೆ ಭಗವದ್ಗೀತೆಯನ್ನು ಪಾಲಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.