ಪ್ರಮುಖ ಸಮಸ್ಯೆಗಳ ಬಗ್ಗೆ ಹೇಳುವುದಾದರೆ ಸರ್ವೆಯಲ್ಲಿ ಭಾಗವಹಿಸಿದ 40% ಜನರ ಪ್ರಕಾರ ಅಸಹಿಷ್ಣುತೆ ಹೆಚ್ಚಳ, ತಲಾ 34 ಪ್ರತಿಶತ ಜನರು ಬೆಲೆ ಏರಿಕೆ ಮತ್ತು ಭೃಷ್ಟಾಚಾರ, 7 ಪ್ರತಿಶತ ಜನರು ಆರ್ಥಿಕತೆ ಮತ್ತು ಭಯೋತ್ಪಾದನೆ ಬಗ್ಗೆ ಮಾತನಾಡಿದ್ದಾರೆ.
ಮೋದಿ ಸರ್ಕಾರ ಚುನಾವಣೆ ಪೂರ್ವ ವಾಗ್ದಾನ ಮಾಡಿದಂತೆ ಅಚ್ಛೇ ದಿನ್ (ಉತ್ತಮ ದಿನ) ತರುವಲ್ಲಿ ಸಫಲವಾಗಿದೆಯಾ ಎಂಬ ಪ್ರಶ್ನೆಗೆ 40% ಜನರು ಹೌದು ಎಂದರೆ, 31 ಪ್ರತಿಶತ ಜನರು ಇಲ್ಲ ಎಂದಿದ್ದಾರೆ ಮತ್ತೆ 22 ಪ್ರತಿಶತ ಜನರ ಪ್ರಕಾರ ಪರಿಸ್ಥಿತಿ ಮೊದಲಿನಂತೆ ಇದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.