ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಇರಾನಿ, ಇಂದು ಸರಸ್ವತಿ ದೇವತೆಗೆ ಪೂಜೆ ಸಲ್ಲಿಸುವ ದಿನ.ಅಭಿವೃದ್ಧಿ ಮತ್ತು ರಾಷ್ಟ್ರವನ್ನು ಬಲಪಡಿಸುವಂತಹ ಗುರಿ ಹೊಂದಿರುವ ಪ್ರತಿಯೊಂದು ಕುಟುಂಬಗಳಿಗೆ ಸರಸ್ವತಿ ದೇವತೆ ಆಶೀರ್ವದಿಸುತ್ತಾಳೆ. ಮದರ್ ಇಂಡಿಯಾಗೆ ಅಪಮಾನ ಮಾಡುವ ಯಾವುದೇ ಕೃತ್ಯವನ್ನು ದೇಶ ಸಹಿಸುವುದಿಲ್ಲ ಎಂದು ಹೇಳಿದರು.
ಇದಕ್ಕಿಂತ ಮೊದಲು, ಆಲ್ ಇಂಡಿಯಾ ಪ್ರಿನ್ಸಿಪಲ್ಸ್ ಕಾನ್ಫ್ರೆನ್ಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ಸರಸ್ವತಿ ವಂದನಾ ಗೀತೆಯನ್ನು ಹಾಡಿದಾಗ, ತೃಪ್ತಿಗೊಂಡ ಸಚಿವೆ ಇರಾನಿ, ಶಿಕ್ಷಕರು ಮಕ್ಕಳಿಗೆ ರಾಷ್ಟ್ರಕ್ಕಾಗಿ ಪ್ರಾರ್ಥಿಸುವುದನ್ನು ಕಲಿಸುತ್ತಿರುವುದು ಸಂತಸಕರ ಸಂಗತಿ. ರಾಷ್ಟ್ರ ವಿರೋಧಿ ಘೋಷಣೆಗಳಲ್ಲ ಎಂದು ಹೊಗಳಿದರು.