ನಾಗಪುರದಲ್ಲಿ ತುಂತುರು ನೀರಾವರಿ ಪದ್ಧತಿ ಕುರಿತು ಮಾತನಾಡುತ್ತಿದ್ದ ಸಚಿವರು ತಮ್ಮ ಈ ಸ್ವಾನುಭವದ ಕುರಿತು ಹೇಳಿಕೊಂಡಿದ್ದಾರೆ. ನಾನು 50 ಲೀಟರ್ನಷ್ಟು ನನ್ನ ಮೂತ್ರವನ್ನು ಸಂಗ್ರಹಿಸಿದೆ ಮತ್ತು ತೋಟದ ಮಾಲಿಯ ಬಳಿ ಕೆಲವು ಗಿಡಗಳಿಗೆ ಇದನ್ನು ಹಾಕು ಎಂದು ತಿಳಿಸಿದೆ. ಪರಿಣಾಮ ಮಾತ್ರ ನನ್ನನ್ನೇ ದಂಗುಬಡಿಸಿತು. ಉಳಿದ ಗಿಡಗಳಿಗಿಂತ ಮೂತ್ರ ಉಣಿಸಲಾಗಿದ್ದ ಗಿಡಗಳು ಒಂದುವರೆ ಪಟ್ಟು ಎತ್ತರಕ್ಕೆ ಬೆಳೆದಿದ್ದವು ಎಂದು ಅವರು ಹೇಳಿದ್ದಾರೆ.