ತಮ್ಮ ಸಾರ್ವಜನಿಕರೊಂದಿಗಿನ ಮಾತುಕತೆ ಕಾರ್ಯಕ್ರಮ 'ಜನತಾ ದರ್ಬಾರ್ನಲ್ಲಿ ಮುಖ್ಯಮಂತ್ರಿ' ಯನ್ನು ಮುಂದುವರೆಸಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೂ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. 9 ತಾಸುಗಳ ಕಾಲ 1,000ಕ್ಕಿಂತ ಹೆಚ್ಚು ದೂರುಗಳು ಕೇಳಿ ಬಂದವು ಎಂದು ತಿಳಿದು ಬಂದಿದೆ.
ಪೊಲೀಸ್ ವ್ಯವಸ್ಥೆ, ಭೂಸುಧಾರಣೆ, ಸಾಮಾನ್ಯ ಆಡಳಿತ, ಮತ್ತು ನೋಂದಣಿ ಇಲಾಖೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಕೇಳಿ ಬಂದಿದ್ದು, ಈ ಕುರಿತು ಪರಿಶೀಲಿಸಿ ದೂರುದಾರರಿಗೆ ಸಹಾಯ ಮಾಡುವಂತೆ ಪೊಲೀಸ್ ಮುಖ್ಯಸ್ಥ ಪಿ.ಕೆ. ಠಾಕೂರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.