"ಭಾಗಲ್ಪುರ್ ಗಲಭೆಯಲ್ಲಿ ಲಾಲು ಪ್ರಸಾದ್ ಮುಸ್ಲಿಮರನ್ನು ಗುರಿಯಾಗಿಸಿದರು ಎಂದು ಒತ್ತಿ ಹೇಳಿರುವ ಪಪ್ಪು ಯಾದವ್, ಆರ್ಎಸ್ಎಸ್ ಅತಿ ಉತ್ತಮ ಸಂಸ್ಥೆ ಎಂದು ಲಾಲು ಪ್ರಸಾದ್ ಈ ಮೊದಲು ಹೇಳಿದ್ದರು. ಅಲ್ಲದೇ ಭಾಗಲ್ಪುರ್ ದಂಗೆಗೆ ಮುಸ್ಲಿಂ ಸಮುದಾಯದವರು ಕಾರಣ ಎಂದು ಅವರು ಅನೇಕ ಬಾರಿ ಲೋಕಸಭೆಯಲ್ಲಿ ಹೇಳಿದ್ದಾರೆ. ನಿತೀಶ್ ಹಲವು ಯೋಜನೆಗಳಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಸುರಿದಿದ್ದಾರೆ. ಆದರೆ ದಂಗೆಯಿಂದ ಪೀಡಿತ ಕುಟುಂಬಗಳಿಗೆ ಪರಿಹಾರ ಧನವನ್ನು ಘೋಷಿಸಲು ಮಾತ್ರ ಮುಂದಾಗಿಲ್ಲ", ಎಂದು ಆರೋಪಿಸಿದ್ದಾರೆ.
"ಬಿಹಾರದಲ್ಲಿ ನಡೆದ ಎಲ್ಲ ದಂಗೆಗಳಿಗೆ ಲಾಲು ಯಾದವ್ ಮತ್ತು ನಿತೀಶ್ ಕುಮಾರ್ ಅವರೇ ಕಾರಣ. ಮುಸ್ಲಿಮರು ಮತ್ತು ದಲಿತರೆಂದರೆ ಅವರು ವಿಷಕಾರುತ್ತಾರೆ. ಅವರು ಹಿಂದುಳಿದ ವರ್ಗಗಳ ದೊಡ್ಡ ಶತ್ರುಗಳು. ಅವರಿಬ್ಬರ ವಿರುದ್ಧ ತನಿಖೆ ನಡೆಸುವಂತೆ ನಾನು ಒತ್ತಾಯ ಮಾಡುತ್ತಿದ್ದೇನೆ. ಸಿಬಿಐ ತತ್ಕ್ಷಣ ಈ ಪ್ರಕರಣದ ಕುರಿತು ತನಿಖೆಯನ್ನು ಆರಂಭಿಸಬೇಕು", ಎಂದು ಅವರು ಆಗ್ರಹಿಸಿದ್ದಾರೆ.