ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ 'ಉತ್ತಮ ಆಡಳಿತ ದಿನ' ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ರಾಣಿ ಲಕ್ಷ್ಮಿಬಾಯಿಗೆ ಜನ್ಮ ನೀಡಿದ ಹೆಗ್ಗಳಿಕೆ ಹೊಂದಿರುವ ದೇಶದಲ್ಲಿ, ಹೆಣ್ಣು ಭ್ರೂಣಹತ್ಯೆ ಪಿಡುಗು ರೂಢಿಯಲ್ಲಿದೆ. ಇದನ್ನು ಮೀರಿದ ದೊಡ್ಡ ಪಾಪ ಇಲ್ಲ, ಎಂದು ಹೇಳಿದರು.
ಈ ದಿಕ್ಕಿನಲ್ಲಿ ಯಶ ಸಾಧಿಸಲು ಕಲೆ ಮತ್ತು ಸಂಸ್ಕೃತಿಯಲ್ಲಿ ಗುರುತಿಸಿಕೊಂಡ ಜನರ ಪಾತ್ರ ಮಹತ್ತರವಾದುದು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಜಾಗೃತಿಗೊಳಿಸುವಲ್ಲಿ ಕಲಾವಿದರ, ಸಾಹಿತಿಗಳ ಪಾತ್ರ ಮಹತ್ತರವಾದುದು. ಅದೇ ರೀತಿಯ ಕಾರ್ಯ ಈಗ ನಡೆಯಬೇಕಿದೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.