ನಾನು ಕೂಡ ಇಬ್ಬರು ಹೆಣ್ಣುಮಕ್ಕಳ ತಂದೆ. ಮಹಿಳೆಯರಿಗೆ ಯಾವ ಉಡುಪು ಧರಿಸಬೇಕು,ಯಾವುದನ್ನು ಧರಿಸಬಾರದೆಂದು ನಾನು ಹೇಳುವುದಿಲ್ಲ. ಆದರೆ ಅವರು ದೇವಾಲಯದೊಳಗೆ ಪ್ರವೇಶಿಸುವಾಗ ಶೂಗಳನ್ನು ತೆಗೆದಿರಿಸಿ, ಗುರುದ್ವಾರ ಪ್ರವೇಶಿಸುವಾಗ ಅವರ ತಲೆಯನ್ನು ಮುಚ್ಚಿಕೊಳ್ಳಬೇಕು ಎಂದು ಮಾತ್ರ ಹೇಳಿದ್ದಾಗಿ ಮಹೇಶ್ ಶರ್ಮಾ ಮಾಧ್ಯಮಕ್ಕೆ ಸ್ಪಷ್ಟಪಡಿಸಿದರು.
ಕೇಂದ್ರ ಸಚಿವರು ನಿನ್ನೆ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗಳಿಗೆ ಸ್ವಾಗತ ಕಿಟ್ ನೀಡಲಾಗುತ್ತದೆ. ರಾತ್ರಿಯಲ್ಲಿ ಒಂಟಿಯಾಗಿ ಅಲೆಯದಂತೆ, ಸ್ಕರ್ಟ್ ಧರಿಸದಂತೆ ಅದರಲ್ಲಿ ಮಹಿಳೆಯರಿಗೆ ಸಲಹೆ ಮಾಡಲಾಗಿದೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು.