ಮೋದಿ ಭಾಷಣದಿಂದ ಬಡವರ ಹೊಟ್ಟೆ ತುಂಬುವುದಿಲ್ಲ: ಖರ್ಗೆ

ಶುಕ್ರವಾರ, 27 ಫೆಬ್ರವರಿ 2015 (16:17 IST)
ಪ್ರಧಾನಿ ಮೋದಿ ಭಾಷಣಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮೋದಿ ಭಾಷಣ ಮಾಡುವಲ್ಲಿ ನಿಸ್ಸೀಮರು, ಭಾಷಣದಿಂದ ಬಡವರ ಹೊಟ್ಟೆ ತುಂಬುವುದಿಲ್ಲ ಎಂದು ಸದನದಲ್ಲಿ ಇಂದು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 
 
ಸದನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಭೂ ಸ್ವಾಧೀನ ಕಾಯಿದೆಯನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿತ್ತು. ಆದರೆ ಕೊನೆಗೆ ಸೋಲನ್ನು ಅನುಭವಿಸಿತು ಎಂದು ಪ್ರಧಾನಿ ನಮ್ಮ ಪಕ್ಷವನ್ನು ಕುಟುಕುತ್ತಿದ್ದಾರೆ. ಮೋದಿ ಕೂಡ ಕಪ್ಪುಹಣವನ್ನು ಹಿಂದೆ ತರುತ್ತೇವೆ ಎಂದು ಹೇಳುತ್ತಾ ಜನರಲ್ಲಿ ಕನಸನ್ನು ಬಿತ್ತಿದ್ದರು. ಆದರೆ ಪ್ರಧಾನಿಯಾಗಿ 9 ತಿಂಗಳು ಕಳೆದರೂ ಕಪ್ಪುಹಣ ಎಲ್ಲಿದೆ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿದ ಅವರು, ಜನರು ಕಪ್ಪುಹಣದ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂದು ತಾತ್ಸಾರ ಬೇಡ. ಮೋದಿಯವರು ಹೇಳಿದ್ದನ್ನು ಮಾಡಿ ತೋರಿಸಲಿ ಎಂದರು.  
 
ಬಳಿಕ, ಮೋದಿ ಭಾಷಣ ಮಾಡುವುದರಲ್ಲಿ ನಿಸ್ಸೀಮರು. ಅವರ ಭಾಷಣದಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ಮೋದಿ ತಮ್ಮ ಭಾಷಣದ ಮೂಲಕ ಬಡವರಿಗೆ ಮೋಸ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಬಿಟ್ಟು ಬಡವರ ಅಭಿವೃದ್ಧಿ ಕಡೆಗೆ ಮನಸ್ಸು ಹರಿಸಲಿ ಎಂದು ತೀವ್ರ ವಾಗ್ದಾಳಿ ನಡೆಸಿದರು. 

ವೆಬ್ದುನಿಯಾವನ್ನು ಓದಿ