ಬಾಲಿವುಡ್ ನಟ ಅಮೀರ್ ಖಾನ್ಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅದು ತಪ್ಪೋ ಸರಿಯೋ ಅಮೀರ್ ಖಾನ್ಗೆ ತನಗೆ ಅನ್ನಿಸಿದ್ದನ್ನು ಹೇಳುವ ಹಕ್ಕಿದೆ. ಅವರಿಗೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಗುಡುಗಿದ್ದಾರೆ.
ಭಾರತ ನಾವು ಹುಟ್ಟಿದ ದೇಶ, ನಮ್ಮ ಕರ್ಮಭೂಮಿ. ಪಾಕಿಸ್ತಾನಕ್ಕೆ ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ಬೇಕಾಗಿದ್ದಲ್ಲಿ ನೀವು ಹೋಗಿ, ನಾವೆಲ್ಲಾ ಭಾರತೀಯರು ಎಂದು ಬಿಜೆಪಿ, ಸಂಘ ಪರಿವಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ.