ವಂದೇ ಮಾತರಂ ಹಾಡುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ: ನಖ್ವಿ

ಭಾನುವಾರ, 30 ಜುಲೈ 2017 (16:13 IST)
ನವದೆಹಲಿ: ವಂದೇ ಮಾತರಂ ಹಾಡುವುದು ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ. ಒಂದು ವೇಳೆ ವಂದೇ ಮಾತರಂ ಹಾಡಲಿಲ್ಲವೆಂದಮಾತ್ರಕ್ಕೆ ಅವರನ್ನು ದೇಶದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.
 
ವಂದೇ ಮಾತರಂ ಕಡ್ಡಾಯಗೊಳಿಸಿ ಮದ್ರಾಸ್‌ ಹೈಕೋಟ್‌ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,. ವಂದೇ ಮಾತರಂ ಹಾಡುವುದು ಬಿಡುವುದು ಅವರವರ ಆಯ್ಕೆಗೆ ಬಿಟ್ಟಿದ್ದು. ಯಾರಿಗೆ ರಾಷ್ಟ್ರಗೀತೆ ಹಾಡಬೇಕೊ ಅವರು ಹಾಡಲಿ , ಇಷ್ಟವಿಲ್ಲದವರು ಹಾಡುವುದು ಬೇಡ. ಹಾಡದೇ ಇರುವವ ದೇಶದ್ರೋಹಿ ಆಗುವುದಿಲ್ಲ ಎಂದಿದ್ದಾರೆ. 
 
ಆದರೆ ಬಂಕೀಮ್‌ಚಂದ್ರ  ಚಟ್ಟೋಪಧ್ಯಾಯ ಅವರು ಬರೆದಿರುವ ರಾಷ್ಟ್ರ ಗೀತೆಯನ್ನು ಯಾರಾದರು ಉದ್ದೇಶಪೂರ್ವಕವಾಗಿ ವಿರೋಧಿಸಿದರೆ ಅದು ಅವರ ಕೆಟ್ಟ ಸಂಪ್ರದಾಯವನ್ನು ತೋರುತ್ತದೆ ಹೊರತು ಅದು ದೇಶದ ಹಿತಾಸಕ್ತಿಯನ್ನು ಅಲ್ಲ ಎಂದಿದ್ದಾರೆ. 
 

ವೆಬ್ದುನಿಯಾವನ್ನು ಓದಿ