ನಿನ್ನೆಯವರೆಗೂ ಹಿಂದೂಗಳು ಮುಸ್ಲಿಂ ಧರ್ಮಕ್ಕೆ ಪರಿವರ್ತಿಸಲ್ಪಡುತ್ತಿದ್ದರು. ಅವರನ್ನು ಬಲವಂತವಾಗಿ ಅಥವಾ ಪ್ರಲೋಭನೆ ನೀಡಿ ಮತಾಂತರಿಸಲಾಯಿತು ಎಂದು ಯಾರೊಬ್ಬರು ಚಕಾರ ಎತ್ತಲಿಲ್ಲ. ಆದರೆ ಈಗ ಗಂಗಾ ನದಿ ಹಿಂತಿರುಗಿ ಹರಿಯಲು ಪ್ರಾರಂಭಿಸಿದಾಗ( ಹಿಂದೂ ಧರ್ಮಕ್ಕೆ ಮರುಮತಾಂತರ) ಹುಸಿ ಜಾತ್ಯತೀತವಾದಿಗಳು ಮತಾಂತರ ಸರಿಯಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.