ಆಘಾತಕಾರಿ ಸಂದೇಶವನ್ನು ನೋಡಿದ ಕೂಡಲೇ ವಂಚನೆಗೊಳಗಾದ ಯುವತಿ ಕೊಟ್ಟಾಯಂನಲ್ಲಿರುವ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾಳೆ. ದೂರನ್ನು ಸ್ವೀಕರಿಸಿರುವ ಆಯೋಗ 'ವಾಟ್ಸಪ್ ಮೂಲಕ ಡೈವೋರ್ಸ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ನೀವು ತಾಯ್ನಾಡಿಗೆ ಆಗಮಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ' ಎಂದು ಆರೋಪಿ ಪತಿಗೆ ಸೂಚಿಸಿದೆ.