ದೆಹಲಿ- ಅಮೃತಸರ್ ಶತಾಬ್ಧಿ ರೈಲಿನಲ್ಲಿ ಮಾರಲ್ಪಡುವ ಟೀ ಕಪ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಪ್ರೀಯ ಅಧ್ಯಕ್ಷ ಅಮಿತ್ ಶಾರ ಚಿತ್ರವಿದ್ದು, ಬಿಜೆಪಿಯ ಸದಸ್ಯರಾಗಿ ನಮ್ಮ ಜತೆ ಸೇರಿ, ದೇಶವನ್ನು ಕಟ್ಟಿ ಎಂದು ಬರೆಯಲಾಗಿದೆ. ಪ್ರಚಾರದ ಈ ತಂತ್ರವನ್ನು ನೋಡಿ ಪ್ರಯಾಣಿಕರು ದಂಗಾಗಿ ಹೋಗಿದ್ದಾರೆ ಮತ್ತು ಇದೀಗ ವಿವಾದವಾಗಿ ತಲೆ ಎತ್ತಿದೆ.
ಬಿಜೆಪಿ ಪ್ರಚಾರಕ್ಕೆ ಬಳಸಿರುವ ಈ ಕಪ್ನಲ್ಲಿ ಸಂಕಲ್ಪ ಫೌಂಡೇಶನ್ ಎಂಬ ಸ್ವಯಂ ಸೇವಾ ಸಂಸ್ಥೆಯ ಹೆಸರು ನಮೂದಾಗಿದೆ. ಈ ಕುರಿತು ಸಂಕಲ್ಪ ಫೌಂಡೇಶನ್ನವರನ್ನು ವಿಚಾರಿಸಲಾಗಿ ಈ ಕಪ್ಗಳನ್ನು ಮೆರವಣಿಗೆಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಕಣ್ತಪ್ಪಿನಿಂದಾಗಿ ಇದು ರೈಲು ಇಲಾಖೆಗೆ ರವಾನೆಯಾಗಲ್ಪಟ್ಟಿದೆ. ರೈಲಿನಲ್ಲಿ ಸ್ವಚ್ಛ ಭಾರತ ಅಭಿಯಾನದ ಕುರಿತ ಕಪ್ ರವಾನೆಯಾಗಬೇಕಿತ್ತು. ಆದರೆ ಅರಿವಿಲ್ಲದೆ ಬಿಜೆಪಿ ಪ್ರಚಾರದ ಕಪ್ ರವಾನೆಯಾಗಿದೆ ಎಂದಿದ್ದಾರೆ.