ಬಹು ಕೋಟಿ ಹಣಕಾಸು ವಂಚನೆ ಹಗರಣಕ್ಕಿಂತ ಮುಂಚೆ ಅವರ ಭಂಡಾರಕ್ಕೆ ಹಣದ ಹೊಳೆಯೇ ಹರಿದುಬರುತ್ತಿತ್ತು. ಈಗ ದಿನಕ್ಕೆ 50 ರೂ. ಸಂಪಾದಿಸಲು ಜೈಲಿನಲ್ಲಿ ರಾಜು ಬೆವರುಹರಿಸಬೇಕಾಗಿದೆ. ಸಂಪಾದನೆ ಮಾಡಿದ ಅಷ್ಟೂ ಹಣವನ್ನು ಖರ್ಚು ಮಾಡಲು ಕೂಡ ರಾಜುಗೆ ಸಾಧ್ಯವಿಲ್ಲ. ಜೈಲಿನ ನಿಯಮದ ಪ್ರಕಾರ, ವೈಯಕ್ತಿಕ ಉದ್ದೇಶಗಳಿಗೆ ದಿನನಿತ್ಯ ಅದರ ಅರ್ಧದಷ್ಟು ಹಣ ಮಾತ್ರ ಬಳಸಲು ಅವಕಾಶವಿದೆ.
ರಾಜು ಅವಶ್ಯಕ ವಸ್ತುಗಳಾದ ಸೋಪು, ಟೂತ್ ಪೇಸ್ಟ್, ಬಿಸ್ಕಿಟ್, ಬ್ರೆಡ್, ನೀರಿನ ಸೀಸೆಗಳನ್ನು 25 ರೂ.ಗಳಲ್ಲಿ ಜೈಲಿನ ಕ್ಯಾಂಟೀನ್ನಿಂದ ಖರೀದಿಸಬಹುದು. ಉಳಿದ ಹಣವನ್ನು ಅವರ ಹೆಸರಿನಲ್ಲಿ ತೆರೆದ ಖಾತೆಗೆ ಜಮಾ ಮಾಡಬೇಕು. ಆದರೆ ರಾಜು ಸ್ಕಿಲ್ಡ್ ಆಗಿದ್ದು, ಅರೆಕುಶಲ ಕರ್ಮಿಗಳು ಮತ್ತು ಕುಶಲಕರ್ಮಿಗಳಲ್ಲದ ಕೈದಿಗಳ ಜೊತೆ ಕೆಲಸಕ್ಕೆ ಹಾಜರಿಯಾಗಬೇಕಾಗಿದೆ.