ಮೋದಿಯನ್ನು ವಿರೋಧಿಸುವವರು 'ಪಾಕಿಸ್ತಾನ್ ಪರ ' ಒಲವನ್ನು ಹೊಂದಿರುವವರು ಎಂಬ ಬಿಜೆಪಿ ನಾಯಕ ಗಿರಿರಾಜ ಸಿಂಗ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, "ನಾನು ಪಾಕ್ಗೆ ಹೋಗಬೇಕಾದ ಪರಿಸ್ಥಿತಿ ಬಂದರೂ ಸಹ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ವಿರೋಧಿಸುವುದನ್ನು ನಿಲ್ಲಿಸುವುದಿಲ್ಲ" ಎಂದು ಗುಡುಗಿದ್ದಾರೆ.
ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾತನಾಡುತ್ತಿದ್ದ ಅವರು "ಇಂದು ನಾವು ಬೆದರಿಕೆಯ ಮೇಲೆ ಬೆದರಿಕೆಯನ್ನು ಪಡೆಯುತ್ತಿದ್ದೇವೆ. ಅಲ್ಲಾನಿಗೆ ಧನ್ಯವಾದಗಳು. ನಾವು ಶ್ರೀನಗರ-ಮುಜಾಫರಾಬಾದ್ ಬಸ್ ಸೇವೆಯನ್ನು ಹೊಂದಿದ್ದೇವೆ. ಆದ್ದರಿಂದ, ನನಗೆ ವಾಘಾ ಗಡಿ(ಪಾಕಿಸ್ತಾನ ಒಳಗೆ) ದಾಟಲು ದೆಹಲಿ ಅಥವಾ ಅಮೃತಸರಕ್ಕೆ ಹೋಗುವ ಅಗತ್ಯವಿಲ್ಲ. ನಾನು ಇಲ್ಲಿಂದ ಮುಜಾಫರಾಬಾದ್ಗೆ ಹೋಗಲು ಟಿಕೆಟ್ ಪಡೆಯುತ್ತೇನೆ ಏಕೆಂದರೆ ನಾನು ಮೋದಿಯನ್ನು ವಿರೋಧಿಸುವುದನ್ನು ನಿಲ್ಲಿಸುವುದಿಲ್ಲ " ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ವಿರೋಧಿಗಳನ್ನು "ಪಾಕಿಸ್ತಾನ ಕಡೆಯವರು " ಎಂದಿದ್ದ ಸಿಂಗ್ ಮೋದಿಯನ್ನು ವಿರೋಧಿಸುವವರು ಪಾಕಿಸ್ತಾನದ ಕಡೆ ನೋಡುತ್ತಿದ್ದಾರೆ, ಮತ್ತು ಅಂತವರಿಗೆ ಪಾಕಿಸ್ತಾನದಲ್ಲಿ ಜಾಗವಿದೆ, ಭಾರತದಲ್ಲಿಲ್ಲ" ಎಂದು ಹೇಳಿದ್ದರು.